My Blog List

Thursday 16 October 2014

ನಿರ್ದೇಶಕರ ವಸಂತಯಾನ

ಇಂದು ಡಯಟ್ ಗೆ ಸುದಿನ. ಈ ರಾಜ್ಯದ ಶೈಕ್ಷಣಿಕ ಉಸ್ತುವಾರಿಯ ಸಾರಥಿಯವರು ನಮ್ಮ ಡಯಟ್ ಗೆ ಬಂದಿದ್ದರು.


ಮಾನ್ಯ ಶ್ರೀ ಜಯಕುಮಾರ್ ಸರ್ ರವರು ಸಿಟಿಇ ಮತ್ತು ಡಯಟ್ ಎರಡೂ ಸಂಸ್ಥೆಗಳಿಗೆ ಭೇಟಿ ನೀಡಿದರು. ಬಂದವರೇ ಮೊದಲಿಗೆ ತಮ್ಮ ಸವಿ ನೆನಪನ್ನು ಅಚ್ಚಳಿಯದೆ ಉಳಿಸಿದ್ದು  ಸಸಿ ನೆಡುವ ಮೂಲಕ.

ನಂತರ ಡಯಟ್ ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು.
ಪ್ರಸ್ತುತ ಜಾರಿಗೊಂಡಿರುವ ಹತ್ತು ಅಂಶಗಳ ಕಾರ್ಯಕ್ರಮ ಹೇಗೆ ಅನುಷ್ಠಾನಗೊಳ್ಳುತ್ತಿದೆ ?
ಆರ್.ಇ.ಎಂ.ಎಸ್  ಅಧ್ಯಯನದ ಫಲಶ್ರುತಿಗಳು ಏನು ?
ತರಬೇತಿಗಳ ಸ್ವರೂಪ ಹೇಗಿದೆ ?
ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಲಹೆಗಳೇನು ?
ಇತ್ಯಾದಿಯಾಗಿ ಹಲವು ವಿಷಯಗಳ ಕುರಿತು ನಮ್ಮ ಸಂಸ್ಥೆಯ ಶೈಕ್ಷಣಿಕ ಚಿಂತಕರೊಂದಿಗೆ ಚರ್ಚಿಸಿದರು.

ಇದಕ್ಕೂ ಮುನ್ನ ಸಿಟಿಇ ಪ್ರಾಂಗಣಕ್ಕೆ ತೆರಳಿದ್ದರು. ಅಲ್ಲಿರುವ ವಿಜ್ಞಾನ ಪಾರ್ಕ್ ಪರಿವೀಕ್ಷಣೆ ಮಾಡಿದರು. ಹಲವು ಮಾಹಿತಿಯನ್ನು ಪಡೆದರು. ಮಕ್ಕಳಿಗೆ ಉಪಯೋಗವಾಗುವಂತೆ ಈ ಪಾರ್ಕ್ ಅಭಿವೃದ್ಧಿಪಡಿಸಲು ಸಲಹೆ ನೀಡಿದರು.
- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...