My Blog List

Wednesday 29 August 2018

ಸಂಶೋಧನಾ ಪಥ

ನವನವೋನ್ಮೇಷಶಾಲಿನಿಯಾದದ್ದು ಪ್ರತಿಭೆ ಮಾತ್ರವಲ್ಲ, ಪ್ರತಿಭಾ ನಿಷ್ಪತ್ತಿಯಾದ ಸಂಶೋಧನೆ ಸಹ. ಸಂಶೋಧನೆ ಎಂಬುದೇ ಪ್ರತಿಭಾ ವಿಶೇಷ. ಹೊಸ ಹೆಜ್ಜೆಗಳಿಗೆ, ಹೊಸ ದಾರಿಗಳಿಗೆ, ಹೊಸ ಸಹವರ್ತಿಗಳಿಗೆ, ಹೊಸ ಹೊಸತು ಅನ್ವೇಷನೆಗಳಿಗೆ ಇದರಿಂದ ನಾಂದಿ ಎಂಬುದರಲ್ಲಿ ಎರಡು ಮಾತಿಲ್ಲ.

ಇಂತಹ ಸಂಶೋಧನೆಗೆ ಪ್ರಸ್ತುತ ಭಾರತೀಯ ಶಿಕ್ಷಣ ರಂಗ ಮುಂದಾಗಿದೆ. ದೇಶದ ಐದು ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಸಹ ರಾಷ್ಟ್ರದ ಶೈಕ್ಷಣಿಕ ಅವಸ್ಥಾಂತರಗಳ ಅಧ್ಯಯನಕ್ಕೆ ಮುಂದಾಗಿವೆ. ಭುವನೇಶ್ವರ , ಭೂಪಾಲ್, ಶಿಲ್ಲಾಂಗ್, ಅಜ್ಮೀರ್, ಮೈಸೂರು ಗಳಲ್ಲಿ ಈಗಾಗಲೇ ಅಧ್ಯಯನಕ್ಕೆ ಹೆಜ್ಜೆ ಇಡಲಾಗಿದೆ.

ಒಂದು ವಲಯದ/ಬ್ಲಾಕ್ ನ ಎಲ್ಲಾ ಒಂದನೇ ತರಗತಿಯಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳು, ಶಿಕ್ಷಕರು, ಸಮುದಾಯದ ಸಹಭಾಗಿತ್ವ, ಎಸ್.ಡಿ.ಎಂ.ಸಿ ಇತ್ಯಾದಿ ಎಲ್ಲಾ ವಿಷಯಗಳನ್ನೂ ಒಳಗೊಂಡಂತೆ ಮಹಾಸಂಶೋಧನೆಯ ಮೂಲಕ ಮಧ್ಯವರ್ತನಗಳನ್ನು ಅಳವಡಿಸಿಕೊಂಡು, ಹೇಗೆ ಗುಣಾತ್ಮಕ ಶಿಕ್ಷಣವನ್ನು ಮುಂದುವರಿಸಬೇಕು ಎಂಬ ನಿಟ್ಟಿನಲ್ಲಿ ಪ್ರಸ್ತುತ ಅಧ್ಯಯನಕ್ಕೆ ಮುಂದಡಿಯಿಡಲಾಗಿದೆ.

ಮೈಸೂರಿನ ಆರ್.ಐ.ಇ ಈ ಸಂಶೋಧನೆಗಾಗಿ ಹುಣಸೂರು ವಲಯವನ್ನು ಆಯ್ಗುಕೊಂಡಿದೆ. ಡಿ.ಎಸ್.ಇ.ಆರ್.ಟಿ ಸಹಯೋಗ, ಡಯಟ್ ಜೊತೆಗೂಡಿ ಸಂಶೋಧನೆ ನಡೆಯಲಿದೆ.  ದಿನಾಂಕ;28-8-2018ರಂದು ಹುಣಸೂರು ಬಿ.ಆರ್.ಸಿಕೇಂದ್ರದಲ್ಲಿ ಇದರ ಕುರಿತು ಮಹತ್ವದ ಸಭೆ ನಡೆಯಿತು.

ಶೈಕ್ಷಣಿಕ ಸಾರಥಿಗಳಾದ ಮೈಸೂರು ಆರ್.ಐ.ಇ ಪ್ರಾಂಶುಪಾಲರಾದ ಪ್ರೋ.ಶ್ರೀಕಾಂತ್ ರವರು, ಸಂಶೋಧನಾ ವಿಭಾಗದ ಡೀನ್ ರಾದ ಪ್ರೋ.ವೆಂಕಟೇಶಮೂರ್ತಿರವರು, ಫ್ರೋ ಗೋಪಾಲ್, ಪ್ರೋ.ಮಂಜುಳಾರಾವ್ ರವರು ಭಾಗವಹಿಸಿದ್ದರು.

 ಡಿ.ಎಸ್.ಇ.ಆರ್.ಟಿ ಸಹಾಯಕ ನಿರ್ದೇಶಕರಾದ ಮಂಜುನಾಥ್ ರವರು, ಮೈಸೂರು ಜಿಲ್ಲೆಯ ಡಿಡಿಪಿಐ(ಆಡಳಿತ) ಮತ್ತು ಡಿಡಿಪಿಐ(ಅಭಿವೃದ್ಧಿ) ಇಬ್ಬರೂ ಸಹ ಉಪಸ್ಥಿತರಿದ್ದರು.  ಎನ್.ಸಿ.ಎಫ್ ನ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಶೋಧನೆ ಹಲವ ಒಳಹುಗಳನ್ನು ನೀಡಲಿದೆ.
ಈ ಕುರಿತು ಪತ್ರಿಕೆಗಳಲ್ಲೂ ಸಹ ಸುದ್ದಿ ಆಯಿತು.
-prASHAnth.M.C
Lecturer
Diet,Mysuru


Monday 20 August 2018

ಮರಿವಿಜ್ಞಾನಿಗಳ ವಿಚಾರಗೋಷ್ಠಿ

"ಹಳೆ ಬೇರು ಹೊಸ ಚಿಗುರು
ಕೂಡಿರಲು ಮರ ಸೊಬಗು
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ 
ಜಸವು ಜನಜೀವನಕೆ ಮಂಕುತಿಮ್ಮ||"

ಎಂಬ ಮಾತಿನಂತೆ ನಮ್ಮ ಡಯಟ್ ಅಂಗಳಕ್ಕೂ ಈ ದಿನ ಮೈಸೂರಿನ 9 ಬ್ಲಾಕ್ ಗಳಿಂದ ವಿಜೇತರಾದ ಒಟ್ಟು 27 ಮರಿ ವಿಜ್ಞಾನಿಗಳು ಆಗಮಿಸಿದ್ದರು.

ಕೈಗಾರಿಕಾ ಕ್ರಾಂತಿ ವಿಚಾರವಾಗಿ ತಮ್ಮ ವಿಚಾರ ಪ್ರಸ್ತುತಪಡಿಸಿದರು. ಬಹಳ ಹುರುಪಿನಿಂದ ತಮ್ಮ ವಿಚಾರ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಶಿಕ್ಷಕರ ಜೊತೆಗಿದ್ದರು.

ಪ್ರಾಂಶುಪಾಲರು ಮಕ್ಕಳನ್ನು ಹುರಿದುಂಬಿಸಿದರು. ಯಾವುದೇ ಭಯವಿಲ್ಲದೇ ಮಕ್ಕಳು ಸಂತೋಷದಿಂದ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳಿ ಎಂದು ಪ್ರೇರೇಪಿಸಿದರು.

ಕಾರ್ಯಕ್ರಮವನ್ನು ನಿರೂಪಣೆಯೊಂದಿಗೆ ಉಪನ್ಯಾಸಕರಾದ  ಪ್ರಶಾಂತ್.ಎಂ.ಸಿ ಆರಂಬಿಸಿದರು. ಉಪನ್ಯಾಸಕರಾದ ಶಿವರಾಜ್ ರವರು ಸ್ಪರ್ಧೆಯನ್ನು ನಡೆಸಿಕೊಟ್ಟರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ರವರು ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ತೀರ್ಪುಗಾರರಾಗಿ ಆಗಮಿಸಿದ್ದ ಟಿಟಿಐ ಪ್ರಾಂಶುಪಾಲರಾದ ನಂಜುಂಡಸ್ವಾಮಿ ರವರು, ಉಪನ್ಯಾಸಕರಾದ ನಾಗೇಂದ್ರ ರವರು, ಶ್ರೀಮತಿ ಕಮಲಮ್ಮ ರವರು ಪಾರದರ್ಶಕವಾಗಿ ರಾಜ್ಯಮಟ್ಟಕ್ಕೆ ಸೂಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು.

72ನೇ ಸ್ವಾತಂತ್ರ್ಯೋತ್ಸವ

72ನೇ ಸ್ವಾತಂತ್ರ್ಯೋತ್ಸವವನ್ನು ಡಯಟ್, ವಸಂತಮಹಲ್, ಮೈಸೂರಿನಲ್ಲೂ ಆಚರಿಸಲಾಯಿತು. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಾತಂತ್ರ್ಯವನ್ನು ಸಂಭ್ರಮಿಸಿದರು.

ಆಗಸ್ಟ್ -15ನೇ ತಾರೀಖು ಏಕೆ ಸ್ವಾತಂತ್ರ್ಯ ದಿನವನ್ನಾಗಿ ಘೋಷಿಸಲಾಯಿತು ? ಬ್ರಿಟೀಷರು ಏಕೆ ಈ ದಿನವನ್ನೇ ಆಯ್ಕೆ ಮಾಡಿಕೊಂಡರು ? ಎಂಬ ವಿವರವನ್ನು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾನ್ಯ ಪ್ರಾಂಶುಪಾಲರಾದ ಮಹದೇವಪ್ಪ ರವರು ದೇಶಾಭಿಮಾನಿಗಳ ಮುಂದಿಟ್ಟರು.

ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಿದ ಎಲ್ಲಾ ಡಯಟ್ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು ಪ್ರಾಂಶುಪಾಲರ ಜೊತೆಗೂಡಿ ಕ್ಲೋಸಪ್ ಫೋಟೋಗೆ ಫೋಸ್ ಕೊಟ್ಟೆವು. 



NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...