My Blog List

Saturday 30 November 2019

2016-17ನೇ ಸಾಲಿನ ಐಟಿ@ಸ್ಕೂಲ್ಸ್ ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿದ್ಯಾರ್ಥಿ ಇ-ಕಂಟೆಂಟ್ ಸಂಬಂಧ ಮುಖ್ಯಶಿಕ್ಷಕರ ಸಭೆ


2016-17ನೇ ಸಾಲಿನ ಐಟಿ@ಸ್ಕೂಲ್ಸ್ ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿದ್ಯಾರ್ಥಿ ಇ-ಕಂಟೆಂಟ್ ಸಂಬಂಧ ಮುಖ್ಯಶಿಕ್ಷಕರ ಸಭೆಯಲ್ಲಿ ಚರ್ಚಿತ ವಿಷಯಗಳು.
·  
      
ಮಾನ್ಯ ಪ್ರಾಂಶುಪಾಲರಾದ ಕೆ.ಮಹದೇವಪ್ಪನವರು ಪ್ರಾಸ್ತಾವಿಕವಾಗಿ ಇಂದಿನ ಸಭೆಯ ಮಹತ್ವವನ್ನು ಮುಖ್ಯಶಿಕ್ಷಕರಿಗೆ ವಿವರಿಸಿದರು.
·         ವಾರದಲ್ಲಿ 3 ಅವಧಿ ಐಸಿಟಿಗೆ ನಿಗದಿಪಡಿಸಬೇಕು.
·         ತರಬೇತಿ ಪಡೆದ ಎಲ್ಲಾ ಶಿಕ್ಷಕರಿಗೂ ಸಮನಾಗಿ ಅವಧಿ ಹಂಚಿಕೆ ಆಗಬೇಕು.
·         8ನೇ ತರಗತಿಗೆ ಪ್ರಸ್ತುತ ವರ್ಷ ಅಳವಡಿಕೆ ಆಗಲಿ.
·         ಇ-ಕಂಟೆಂಟ್ ನಿರ್ವಹಣೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಪಟ್ಟಿಯನ್ನು ಡಯಟ್ ಗೆ ಮುಖ್ಯಶಿಕ್ಷಕರು ನೀಡಬೇಕು.
·         10ರಲ್ಲಿ 5 ಯುನಿಟ್ ಮಾತ್ರ 3 ತಿಂಗಳ ಅವಧಿಗೆ ಮಾಡಬೇಕಾಗಿದೆ.
·         ವೆಬ್ ರಿಸೋರ್ಸ್ ಉಳಿದು ಇತರೆ ತರಗತಿಗಳನ್ನು ನಿರ್ವಹಿಸಬೇಕು.

·         ಸೂಚನೆಗನುಸಾರವಾಗಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಾರೆ.
·         9ನೇ ತರಗತಿಯಲ್ಲೂ ಇದು ಪ್ರಾಯೋಗಿಕವಾಗಿ ಮುಂದುವರಿಯುತ್ತದೆ.
·         2ನೇ ಹಂತದಲ್ಲಿ ಅಂದರೆ 9ನೇ ತರಗತಿಯಲ್ಲಿ ಇ-ಪೋರ್ಟ್ ಪೋಲಿಯೋವನ್ನು ಮಗುವು ಸಲ್ಲಿಸಬೇಕಾಗಿರುತ್ತದೆ.
·         2022ರ ಲ್ಲೂ 10ನೇ ತರಗತಿಯ ವಿದ್ಯಾರ್ಥಿಗೆ ಇದೇ ವಿಷಯ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ.
·         ತರಬೇತಿ ಪಡೆದ ಇಬ್ಬರು ಶಿಕ್ಷಕರೇ ಉಳಿದ ಶಿಕ್ಷಕರಿಗೆ ಮಾರ್ಗದರ್ಶನ ನೀಡಬೇಕು.
·         ಕಂಪ್ಯೂಟರ್ ಲ್ಯಾಬ್ ನಿರ್ವಹಣೆಗೆ ಲಾಗ್ ಪುಸ್ತಕವನ್ನು ನಿರ್ವಹಣೆ ಮಾಡಬೇಕು.
·         ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಇರುವ ಕಂಪ್ಯೂಟರ ಗಳನ್ನು ಹಂಚಿಕೆಮಾಡಿ ತರಗತಿ ನಿರ್ವಹಿಸಬೇಕು.
·         ಮುಂದಿನ ದಿನಗಳಲ್ಲಿ ಲ್ಯಾಬ್ ಬಳಕೆ ಸಂಬಂಧ ಮಾಹಿತಿಯನ್ನುಪಡೆಯಲಿದ್ದೇವೆ.
·         ಇಂದಿನ ಸಭೆಗೆ ಹಾಜರಾಗದ ಮತ್ತು ತರಬೇತಿಗೂ ಹಾಜರಾಗದ ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೊಟೀಸ್ ನೀಡುವಂತೆ ಸಭೆಯಲ್ಲಿ ಪ್ರಾಂಶುಪಾಲರು ಸೂಚಿಸಿದರು.
·          


Sunday 24 November 2019

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಶಾಲೆಗಳ ಮುಖ್ಯಶಿಕ್ಷಕರ ಸಭೆ




ಐಟಿ@ಸ್ಕೂಲ್  ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ ಹಂತ ಹಂತವಾಗಿ ಸರ್ಕಾರಿಶಾಲೆಗಳ ಬಲವರ್ಧನೆಗೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಶಾಲೆಗಳಿಗೆ ಲ್ಯಾಪ್ ಟಾಪ್, ಪ್ರೊಜೆಕ್ಟರ್, ಕಂಪ್ಯೂಟರ್ ಲ್ಯಾಬ್, ಕಂಪ್ಯೂಟರ್ ಗಳು, ಶಿಕ್ಷಕರಿಗೆ ತರಬೇತ ಇತ್ಯಾದಿ ಹಮ್ಮಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಮಕ್ಕಳೇ ಹೆಚ್ಚಿರುವ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಡಿ.ಎಸ್.ಇ.ಆರ್.ಟಿ ನಿರ್ದೇಶದಂತೆ ಮೈಸೂರು ಜಿಲ್ಲೆಯ 45 ಶಾಲೆಗಳಮುಖ್ಯಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಇಲಾಖೆ ನಿರ್ದೇಶದನ್ವಯ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು.


ಜೊತೆಗೆ ಟೆಲಿಶಿಕ್ಷಣ ಶಾಲೆಗಳ ಹಸ್ತಾಂತರ ಪ್ರಕ್ರಿಯೆಯನ್ನು ಅವಲೋಕಿಸಲಾಯಿತು. ಟಿನರಸೀಪುರ ಮತ್ತು ಹೆಚ್.ಡಿ.ಕೋಟೆಗಳಲ್ಲಿ ಈಗಾಗಲೇ ತಲಾ 11 ಶಾಲೆಗಳು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಶಾಲೆಗಳಲ್ಲೂ ಹಸ್ತಾಂತರ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿರುವುದಾಗಿ ವಿಷಯವನ್ನು ಹಂಚಿಕೊಳ್ಳಲಾಯಿತು. ನೋಡಲ್ ಅಧಿಕಾರಿಗಳಾದ ಶ್ರೀಮತಿ ವಿಜಯಶ್ರೀ ಮೇಂ ರವರು ಸಭೆಗೆ ಮಾಹಿತಿ ಹಂಚಿಕೊಂಡರು.

ಇದೇ ವೇಳೆ ಇ ವೇಸ್ಟೇಜ್ ಕಾರ್ಯಕ್ರಮ ಅನುಷ್ಠಾನ ಸಂಬಂಧ ಮಾಹಿತಿಯನ್ನು ಶ್ರೀಮತಿ ಭಾಗ್ಯಲಕ್ಷ್ಮೀ ರವರು ವಿವರಿಸಿದರು. ಶಾಲೆಗಳಲ್ಲಿ ತೆರೆಯಬೇಕಾದ  ಇ-ಕೋಶದ ಬಗ್ಗೆ, ಅದರ ಕಾರ್ಯವೈಖರಿಗಳ ಬಗ್ಗೆ, ಅನುಪಯುಕ್ತ ವಸ್ತುಗಳ ಪಟ್ಟಿ ಮಾಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು

ಕಾರ್ಯಕ್ರಮದಲ್ಲಿ ಇ-ಪ್ರೊಕ್ರ್ಯೂರ್ ಮೆಂಟ್  ಆಪ್ ಬಳಸಿಕೊಂಡು ಎ.ಎಂ.ಸಿ ಮಾಹಿತಿ ಹೇಗೆ ಒದಗಿಸಬೇಕೆಂಬುದರ ಬಗ್ಗೆ ಮತ್ತು ಐಟಿ@ಸ್ಕೂಲ್ಸ್ ಕಾರ್ಯಕ್ರಮದ ಮಹತ್ವ, ಶಿಕ್ಷಕರ ತರಬೇತಿ ಪ್ರಕ್ರಿಯೆ ಮತ್ತು ಶಾಲೆಗಳಲ್ಲಿ ವೇಳಾಪಟ್ಟಿ ಅಳವಡಿಕೆ ಹಾಗು ಶಿಕ್ಷಕರ ಪಾಠಗಳನ್ನು ಅವಲೋಕಿಸಿ ಗೂಗಲ್ ಫಾರಂ ಭರ್ತಿ ಮಾಡಬೆಕಾದ ಬಗ್ಗೆ ವಿವರಣೆಯನ್ನು ನೋಡಲ್ ಅಧಿಕಾರಿ ಪ್ರಶಾಂತ್.ಎಂ.ಸಿ ವಿವರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಶ್ರಿ ಮಹದೇವಪ್ಪನವರು ಎಲ್ಲಾ ಮಾಹಿತಿಗಳನ್ನು ಪುನರ್ ವಿಮರ್ಶಿಸಿ, ಹಂಚಿಕೊಂಡರು.

ಶಿವಮೊಗ್ಗೆ ಲಗ್ಗೆ ಇಟ್ಟ ಕ್ಷಣ



ಟಿಇ ಪ್ಲಾನ್ ನಡಿಯಲ್ಲಿ ಕಳೆದ ವರ್ಷಗಳಿಂದ ಪ್ರತಿ ಡಯಟ್ ತಂಡ ಮತ್ತೊಂದು ಡಯಟ್ ಗೆ ತೆರಳಿ ಪರಸ್ಪರ ತಾವು ಕೈಗೊಂಡಿರುವ ನಾವಿನ್ಯಯುತ ಚಟುವಟಿಕೆಗಳು, ಶೈಕ್ಷಣಿಕ ಮೇಲುಸ್ತುವಾರಿ ಹಂತಗಳನ್ನು ಅವಲೋಕಿಸಿ ವರದಿ ಮಾಡುತ್ತಿದ್ದು, ಅಂತೆಯೇ ಶಿವಮೊಗ್ಗೆಯ ಉಪನ್ಯಾಸಕರ ತಂಡ ಮೈಸೂರು ಡಯಟ್ ಗೆ ಆಗಮಸಿತ್ತು. ಸಿಟಿಇ ಮತ್ತು ಡಯಟ್ ನ ವಿವಿಧ ತರಬೇತಿ ಕೇಂದ್ರಗಳಿಗೆ ತೆರಳಿ ಮತ್ತುಪ್ರಾಂಶುಪಾಲರು ಹಾಗುಉಪನ್ಯಾಸಕರ ಜೊತೆಗೂಡಿ ಚರ್ಚೆ ನಡೆಸಿದರು.







ಮೆಘಾ ಸಂಶೋಧನೆ ಓಘ


ದೇಶದಲ್ಲೇ ಎನ್.ಸಿ.ಇ.ಆರ್.ಟಿ ವತಿಯಿಂದ ನಡೆಸಲಾಗುತ್ತಿರುವ  ಬ್ಲಾಕ್ ಮಟ್ಟದ ಸಂಶೋಧನೆಯು ಮೈಸೂರು ಜಿಲ್ಲೆಯ ಹುಣಸೂರು  ವಲಯದಲ್ಲಿ ಮುಂದುವರಿದಿದೆ. ಈಗಾಗಲೇ ಬೇಸ್ ಲೈನ್ ಸರ್ವೆ ಹಂತ ಕಾರ್ಯ ಕಳೆದ ವರ್ಷವೇ ಮುಗಿದ್ದಿದ್ದು, ಪ್ರಸ್ತುತ ವರ್ಷ ಹಲವು ಟಾಸ್ಕ್ ಪೋರ್ಸ್ ಗಳ ನೇತೃತ್ವದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ   ಮೆಘಾ ಸಂಶೋಧನೆಯ ಪ್ರಕ್ರಿಯೆಯನ್ನು ವೀಕ್ಷಿಸಲು ರಾಷ್ಟ್ರ ಹಂತದ ತಂಡ ಹುಣಸೂರಿಗೆ ಭೇಟಿ ನೀಡಿತ್ತು. 


ದಿನಾಂಕ:16-11-2019 ರ ಶನಿವಾರದಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್.ಐ.ಇ) ನಾಲ್ಕು ತಂಡಗಳಲ್ಲಿ ಹುಣಸೂರು ವಲಯದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಭೇಟಿ ಮಾಡಿತು. ತಂಡದ ನೇತೃತ್ವವನ್ನು ಎನ್.ಸಿ.ಇ.ಆರ್.ಟಿ ಯ ತಂಡದ ಸಾರಥ್ಯ ವಹಿಸಿದ್ದ ಫ್ರೋ.ಶ್ರೀವತ್ಸ, ಭೋಪಾಲ್ ಆರ್.ಐ.ಇ ಪ್ರಾಂಶುಪಾಲರಾದ ಫ್ರೋ.ಪ್ರಧಾನ್, ಮತ್ತು ಆರ್.ಐ.ಇ,ಮೈಸೂರಿನ ಮುಖ್ಯಸ್ಥರಾದ ಫ್ರೋ.ಶ್ರೀಕಾಂತ್ ಮತ್ತು ಸಂಶೋಧನೆಯ ಸಾರಥ್ಯವಹಿಸಿಕೊಂಡಿರುವ ಫ್ರೋ.ವೆಂಕಟೇಶಮೂರ್ತಿ ರವರು ಮತ್ತು ಅವರ ತಂಡ  ಈ ಹಲವು ಮಾರ್ಗಗಳ ನೇತೃತ್ವ ವಹಿಸಿದ್ದರು.



  • ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳ ಕಲಿಕಾಮಟ್ಟವನ್ನು ಅಳೆಯಲಾಯಿತು.
  • ಈ ಹಿಂದೆ ತರಬೇತಿ ಪಡೆದಿರುವ ಶಿಕ್ಷಕರು ತರಗತಿಪ್ರಕ್ರಿಯೆಗಳಲ್ಲಿ ಅಳವಡಿಸಿಕೊಂಡಿರುವ ನಾವಿನ್ಯಯುತ ಚಟುವಟಿಕೆಗಳನ್ನು ಪರಿಶೀಲಿಸಿದರು.
  • ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕರಿಗೆ ಹೇಗೆ ನೆರವು ಆರ್.ಐ.ಇ ವತಿಯಿಂದ ಬೇಕೆಂಬುದನ್ನು ತಿಳಿಸಿದರು.
  • ಎಸ್.ಡಿ.ಎಂ.ಸಿ ಸದಸ್ಯರ ಜೊತೆ ಚರ್ಚಸಿದರು. ಹೇಗೆ ಶಾಲೆಗೆ ಈ ಸದಸ್ಯರು ನೆರವಾಗುತ್ತಿದ್ದಾರೆ ಎಂಬುದನ್ನು ಅರಿತರು.


ಪ್ರತಿ ಶಾಲೆಗಳು ಸಹ ಅತಿಥಿಗಳ ಸ್ವಾಗತಕ್ಕೆ ಸಜ್ಜುಗೊಂಡಿದ್ದವು. ಕಡೆಯದಾಗಿ ಹುಣಸೂರು ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಟಿಇ ಪ್ರಾಂಶುಪಾಲರು ಮತ್ತು ಜಂಟಿನಿರ್ದೇಶಕರಾದ ಶ್ರಿಮತಿ ಗೀತಾಂಬರವರು, ಸಿಟಿಇ ರೀಡರ್ ಮತ್ತು ಕಾರ್ಯಕ್ರಮದ ಉಸ್ತುವಾರಿಯವರಾದ ಶ್ರೀಮತಿ ಮಂಜುಳಾ ಮೇಂ ರವರು, ಡಿಡಿಪಿಐ ಆಡಳಿತರವರಾದ ಶ್ರೀ ಡಾ.ಪಾಂಡುರಂಗರವರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು.ಎಸ್.ಪಿ ಮತ್ತು ಡಯಟ್ ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್.ಎಂ.ಸಿ ರವರು ಹಾಜರಿದ್ದರು. ತಾಲೂಕಿನ ಎಲ್ಲಾ ಸಿ.ಆರ್.ಪಿಗಳು ಸಭೆಯಲ್ಲಿ ಹಾಜರಿದ್ದರು.


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...