My Blog List

Saturday 17 October 2015

ಸ್ವಾತಂತ್ರ್ಯೋತ್ಸವ

ಪ್ರಾಚಾರ್ಯರನ್ನು ಬರಮಾಡಿಕೊಳ್ಳುತ್ತಿರುವ ಡಿಇಡಿ ವಿದ್ಯಾರ್ಥಿಗಳು


ಧ್ವಜಾರೋಹಣಕ್ಕೆ ಸಿದ್ಧತೆ

ಶಿಸ್ತಿನ ಸಿಪಾಯಿಗಳು

ಧ್ವಜಸ್ತಂಭ


ಕೈಬೀಸಿ ಕರೆವ ಕರಕುಶಲ ಕಲೆ

ಬಳಸಿದ ಕಾಗದ. ಬಿಸಾಡಿದ ಕಾಗದ. ಒಡೆದ ಗಾಜು. ಒಡೆದ ಬಳೆ. ಒರೆದ ಪೆನ್ಸಿಲ್. ಹರಿದ ಬಟ್ಟೆ....ಹೀಗೆ ಶಾಲಾ ಅಂಗಳದಲ್ಲಿ ಕಸವೆಂದು ಎಸೆದ ವಸ್ತುಗಳು ರಸದ ರೂಪ ತಳೆದಿವೆ. ತ್ಯಾಜ್ಯದ ಜೊತೆ ವ್ಯಾಜ್ಯ ಮಾಡಿ ಕಲ್ಪನೆಗೆ ಜೀವ ತುಂಬಿದವರು ಈ ಶಾಲೆಯ ಶಿಕ್ಷಕರು.
ಬಳಸಿದ ಕಾಗದ ಬಳಸಿ ಅರಳಿದ ಕಲೆ
ಇದು ಹೆಚ್.ಡಿ.ಕೋಟೆ ತಾಲೂಕಿನ ಜೆಬಿ ಸರಗೂರು ಪ್ರೌಢಶಾಲೆಯ ಕರಕುಶಲ ಕಲೆಯ ಒಂದು ಚಿತ್ರಣ. ಇಲ್ಲಿನ ವಿದ್ಯಾರ್ಥಿಗಳಿಗೆ ಕಸದಿಂದ ರಸತೆಗೆಯುವ ಈ  ಕುಶಲ ಕಲೆ ಕಂಡರೆ ಇನ್ನಿಲ್ಲದ ಪ್ರೀತಿ.

ಬಳಸಿದ ಕಾಗದ ಬಳಸಿ ಅರಳಿದ ಕಲೆ
ಕಸವೇ ಜನನ....ರಸವೇ ಅನುರಣನ...

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ....

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ಬಾಪೂಜಿ-ಶಾಸ್ತ್ರೀಜಿ ನೆನಪು


"ಬಾಪೂಜಿ ನಿನ್ನ ಕೈಯೊಳಗಿದ್ದ ಕೋಲು
ಕೋಲ್ಮಿಂಚಿಗೂ ತರಿಸಬಹುದಲ್ಲವೇ ಸೋಲು"
ಈ ಸಾಲುಗಳು ಮತ್ತು





"ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ"
ಈ ಸಾಲುಗಳು 
ಇಂದು ಅನುರಣಿಸಿದವು.

ಕಾರ್ಯಕ್ರಮದ ಉದ್ಘಾಟನೆ ಮಾನ್ಯ ಪ್ರಾಂಶುಪಾಲರಿಂದ

ಬಾಪೂಜಿ ಬಗ್ಗೆ ಬಿಚ್ಚಿಟ್ಟ ಮಾತು ಪ್ರಾಂಶುಪಾಲರಾದ ಶ್ರೀ ಆರ್. ರಘುನಂದನ್ ರವರಿಂದ 

ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್"

ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್"
ಇಂದು ಮತ್ತೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನೃಪತುಂಗ ಸಭಾಂಗಣ ವೇದಿಕೆ ಆಯ್ತು. ನಮ್ಮ ಸಂಸ್ಥೆಯ ಲಿಪಿಕ ನೌಕರರಾದ ಶ್ರೀ ಸೋಮಯ್ಯ ರವರ ಸುಪುತ್ರ ಆದೀಶ್ ಗೆ ಗೌರವಿಸಲಾಯಿತು. ಕಾರಣ ಈತ ವಿಶೇಷ ಚೇತನ. ಆದರೆ ಹೆತ್ತವರಿಗೆ, ನಮ್ಮ ನಾಡಿಗೆ ವಿಶಿಷ್ಟ ಪ್ರತಿಭೆ. ಮಾತು ಮೌನವಾದರೂ, ಶಬ್ದದೊಳಗಿನ ಶಬ್ದ ಮಾತ್ರ ಕೇಳುವ ಪೋರ ಈ ಆದೀಶ್. ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ. ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ, ಈಜುಸ್ಪರ್ಧೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಆದೀಶ್ ನಮ್ಮ ಡಯಟ್ ಸಿಬ್ಬಂದಿಯವರ ಸುಪುತ್ರ ಎಂಬುದು ಹೆಮ್ಮೆಯ ಸಂಗತಿ. ಈತನಿಗೆ ಡಯಟ್ ವತಿಯಿಂದ ಗೌರವಿಸಲಾಯಿತು. ಇನ್ನೂ ಸಾಧನೆಯ ಶಿಖರವೇರಲಿ ಎಂದು ಎಲ್ಲರೂ ಹರಸಿದರು.

ಅಂತರರಾಷ್ಟ್ರೀಯ ಚೆಸ್ ಆಟಗಾರ ಆದೀಶ್ ಗೆ ಪ್ರಾಂಶುಪಾಲರಿಂದ ಗೌರವ

SOME - ಆಲೋಚನೆಯ ಒಂದು ನೋಟ

ಹೆಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಕ್ಲಸ್ಟರ್. ಅಂದು 22-08-2015. ಕ್ಲಸ್ಟರ್ ನ ನಂಜನಾಯಕನಹಳ್ಳಿಯಲ್ಲಿ SOME-ಆಲೋಚನೆಗಳ ಸಭೆ ನಡೆದಿತ್ತು. ಕ್ಲಿಷ್ಟಕರ ಅಂಶಗಳನ್ನು ಈಗಾಗಲೇ ಪಟ್ಟಿಮಾಡಿಕೊಂಡಿದ್ದ ಶಿಕ್ಷಕರು ವಿದ್ಯಾರ್ಥಿಗಳ ಮುಂದೆ ಪಾಠ ಪ್ರಸ್ತುತಪಡಿಸಿದರು. 

ನಂಜನಾಯಕನಹಳ್ಳಿ ಕ್ಲಸ್ಟರ್ ಸಮಾಲೋಚನಾ ಸಭೆ

ನಂಜನಾಯಕನಹಳ್ಳಿ ಕ್ಲಸ್ಟರ್ ಸಮಾಲೋಚನಾ ಸಭೆ

ಪುಸ್ತಕದಿಂದ ಮಸ್ತಕಕ್ಕೆ...

 ಮೈಸೂರು ಡಯಟ್ ಪರಂಪರೆಯ ಪರಿಯ ಪ್ರತಿಬಿಂಬ. ಹೊಸ ಪರಂಪರೆಯ ಹುಟ್ಟು ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಪುಸ್ತಕಗಳ ಪರಿಚಯ ಕಾರ್ಯಾಗಾರ ನಮ್ಮ ಡಯಟ್ ನಲ್ಲಿ ನಡೆಯಿತು. ಮೊದಲಿಗೆ ಶ್ರೀ ಸ್ವಾಮಿ, ಹಿರಿಯ ಉಪನ್ಯಾಸಕರು ರವರು "ತೋತೋಚಾನ್ " ಪುಸ್ತಕವನ್ನು ಪರಿಚಯಿಸಿದರು. ಇದೊಂದು ಅವಿಸ್ಮರಣೀಯ ಅನುಭವ ತಂದುಕೊಟ್ಟಿತು.


ಹಾಗೆಯೇ 24-05-2015 ರಂದು "ರಂಗಣ್ಣನ ಕನಸಿನ ದಿನಗಳು" ಪುಸ್ತಕ ಪರಿಚಯ ಮಾಡಿಕೊಡಲಾಯಿತು. ಉಪನ್ಯಾಸಕರಾದ ಶ್ರೀ ಪ್ರಶಾಂತ್.ಎಂ.ಸಿ ರವರು ರಂಗಣ್ಣನ ಕನಸಿನ ದಿನಗಳನ್ನು ವಾಸ್ತವಕ್ಕೆ ತೆರೆದಿಟ್ಟರು.  ಅಂದು ರಂಗಣ್ಣನ ಕನಸಿನ ದಿನಗಳಲ್ಲಿನ ಪಾತ್ರಗಳು ನಮ್ಮೊಳಗಿನ ಹಲವು ವ್ಯಕ್ತಿ ಚಿತ್ರಗಳನ್ನು ಕಣ್ ಮುಂದೆ ತಂದವು.
ರೇಖೆಗಳಲ್ಲಿ ರಂಗಣ್ಣ...

ಪುಸ್ತಕ ಪರಿಚಯಿಸುತ್ತಿರುವ ಉಪನ್ಯಾಸಕರಾದ ಶ್ರೀ ಪ್ರಶಾಂತ್. ಎಂ.ಸಿ

ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು

ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು

ಪ್ರಶ್ನಿಸುತ್ತಿರುವ ಪುಸ್ತಕಪ್ರೇಮಿ ವಿದ್ಯಾರ್ಥಿಗಳು

ಟೆಸ್ ಇಂಡಿಯಾದ ಮ್ಯಾಸಿವ್ ಆನ್ ಲೈನ್ ಓಪನ್ ಕೋರ್ಸ್ ಕಾರ್ಯಕ್ರಮ

 ಟೆಸ್ ಇಂಡಿಯಾದವರು ನಡೆಸಿದ ಮ್ಯಾಸಿವ್ ಆನ್ ಲೈನ್ ಓಪನ್ ಕೋರ್ಸ್ ನ್ನು ರಾಜ್ಯದ ಆಯ್ದ ಡಯಟ್ ಮತ್ತು ಸಿಟಿಇ ಉಪನ್ಯಾಸಕರಿಗೆ ನೀಡಲಾಯಿತು. ಕೋರ್ಸ್ ಪೂರ್ಣಗೊಳಿಸಿದ ಉಪನ್ಯಾಸಕರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಡಿ.ಎಸ್.ಇ.ಆರ್.ಟಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಿಟಿಇ ಉಪನ್ಯಾಸಕರಾದ ಶ್ರೀ ಅಮಿತ್ ರವರು ಮತ್ತು ನಮ್ಮ ಡಯಟ್ ನ ಪ್ರಶಾಂತ್ ರವರು ಪ್ರಮಾಣ ಪತ್ರ ಪಡೆದರು.


ಮೂಕ್ ಪ್ರಮಾಣಪತ್ರ ವಿತರಣೆ ಸಮಾರಂಭ

ಮೂಕ್ ಕಾರ್ಯಕ್ರಮ
















NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...