My Blog List

Tuesday, 28 July 2020

ಘಮ ಘಮಿಸಿದ "ವಿದ್ಯಾಗಮ"

ಈ ದಿನ ಡಯಟ್ ವಸಂತ ಮಹಲ್ ನಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಶೈಕ್ಷಣಿಕ ವಲಯಗಳ ಬಿ.ಆರ್.ಸಿ ರವರು ತಮ್ಮ ಬ್ಲಾಕ್ ಗಳಲ್ಲಿ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಕ್ಕೆ ಮಾಡಿಕೊಂಡಿರುವ ತಯಾರಿಗಳನ್ನು ಪ್ರಸ್ತುತ ಪಡಿಸಿದ ರು. ಕಾರ್ಯಕ್ರಮದ ನೋಡಲ್ ಅಧಿಕಾರಿ ಉಪನ್ಯಾಸಕರಾದ ಶ್ರೀ ಆರ್.ಎಂ. ಶಶಿಧರ್ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿದು ನಂತರ ಪ್ರತಿ ಬ್ಲಾಕಿನ ಕ್ಷೇತ್ರ ಸಮನ್ವಯಾಧಿಕಾರಿ ಗಳಿಗೆ ಪ್ರಸ್ತುತಿಗೆ ಅವಕಾಶ ಮಾಡಿಕೊಟ್ಟರು.

ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎಂಬ ಕುರಿತು ಸುದೀರ್ಘ ಅರ್ಥಪೂರ್ಣ ಚರ್ಚೆ ನಡೆಯಿತು. 



ವಿದ್ಯಾಗಮ “ನಿರಂತರ ಕಲಿಕಾ ಕಾರ್ಯಕ್ರಮ”ವನ್ನು ಅನುಷ್ಠಾನ ಮಾಡುವಾಗ ಈಕೆಳಕಂಡ ಅಂಶಗಳ ಬಗ್ಗೆ ಗಮನ ಹರಿಸುವಂತೆ ಚರ್ಚಿಸಲಾಯಿತು. 

ವಿದ್ಯಾರ್ಥಿಗಳ ಕಲಿಕೆಗೆ ಇದು ಪೂರಕ ವ್ಯವಸ್ಥೆಯೇ ಹೊರತು ಇದು ಪರ್ಯಾಯವಲ್ಲ . 

ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಂತ್ರಜ್ಞಾನವನ್ನು ಆಧರಿಸಿ ಕಲಿಕೆಯನ್ನು ಪ್ರಾರಂಭಿಸಲಾಗಿದೆ ಹಾಗು ಪೋಷಕರು ಸಹಕಾರ ನೀಡುತಿದ್ದಾರೆ.

ಬ್ಲಾಕ್ ಹಂತದಲ್ಲಿ ಶಿಕ್ಷಕರಿಗೆ ತಂತ್ರಜ್ಞಾನದ ಅರಿವು ಮೂಡಿಸುವುದು.

ಟ್ಯಾಲ್ಪ್ ತರಬೇತಿ ಪಡೆದ ಶಿಕ್ಷಕರ ಸಹಕಾರ ಪಡೆದು ತರಬೇತಿ ನೀಡುವುದು. 

ಸಮುದಾಯ ಬಾನುಲಿ ಕೇಂದ್ರಗಳನ್ನು ಬಳಸಿಕೊಂಡು ಪಾಠಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಕರನ್ನು ಅಧಿಕವಾಗಿ ಕಾರ್ಯಕ್ರಮಕ್ಕೆ ಪ್ರೇರೇಪಿಸುವುದು. 

ಸಿ.ಆರ್.ಪಿ/ ಬಿ.ಆರ್.ಪಿ, ಮತ್ತು ಮುಖ್ಯಶಿಕ್ಷಕರಿಗೆ ಬ್ಲಾಕ್ ಹಂತದಲ್ಲಿ ಪೂರ್ಣ ಮಾಹಿತಿಯನ್ನು ಸಭೆಗಳ ಮೂಲಕ  ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವುದು. 

ಸ್ವಯಂ ಸೇವಕರನ್ನು ಬಳಸಿಕೊಳ್ಳುವುದು. 

ಶಾಲಾ ಹಂತದಲ್ಲಿ  “ ತಾಯಂದಿರ ಸಭೆ”ಯನು ಕರೆದು ಕಾರ್ಯಕ್ರಮದ ಬಗ್ಗೆ ಪೂರ್ಣ ಮಾಹಿತಿ ನೀಡುವುದು. 

ತಾಲೂಕು ಹಂತದಲ್ಲಿ ಡಯಟ್ ನ ನೋಡಲ್ ಅಧಿಕಾರಿಗಳನ್ನು ಒಳಗೊಂಡAತೆ ತಾಲೂಕು ಅನುಪಾಲನ ಸಮಿತಿಯನ್ನು ರಚಿಸಿ, ೧೫ ದಿನಗಳಿಗೊಮ್ಮೆ ಸಭೆಯ ಮೂಲಕ ಅನುಪಾಲನೆ ಮಾಡುವುದು. 

ಶೇ೨೦ ರಿಂದ ಶೇ೩೦ರಷ್ಟು ಕಡಿತಗೊಳಿಸಿರುವ ಪ್ರಸ್ತುತ ವರ್ಷದ ಪಠ್ಯಕ್ರಮವು ತರಗತಿವಾರು, ವಿಷಂiÀವಾರು ಡಿ.ಎಸ್.ಇ.ಆರ್.ಟಿ  ಮತ್ತು ಪಠ್ಯಪುಸ್ತಕದ ಸಂಘದ ವೆಬ್ ಸೈಟ್ ನಲ್ಲಿ ಲಭ್ಯವಿದ್ದು ಶಿಕ್ಷಕರಿಗೆ ವ್ಯಾಪಕ ಮಾಹಿತಿ ನೀಡಿ ಮನವರಿಕೆ ಮಾಡುವುದು. 

ಕಲಿಕಾ ವಠಾರದಲ್ಲಿ ಎನ್.ಜಿ.ಓಗಳನ್ನು  ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು. 

ಚಂದನವಾಹಿನಿ, ದೀಕ್ಷಾ ಪೋರ್ಟಲ್, ಮೇಘಶಾಲಾ, ಪ್ರಥಮ್ ಸಂಸ್ಥೆ, ಮ್ಯಾಜಿಕ್ ಫೌಂಡೇಷನ್, ಅಗಸ್ತö್ಯ ಫೌಂಡೇಷನ್, ಶಿಕ್ಷಣ  ಫೌಂಡೇಷನ್ ರವg ಶೈಕ್ಷಣಿಕ ತಂತ್ರಗಳನ್ನು ಮತ್ತು ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವುದು. 

ಮೂರು ಗುಂಪಿನ (ಕಾಲ್ಪನಿಕ ಕಲಿಕಾ ಕೋಣೆ, ಇಂಟೆಲಿಜೆAಟ್, ಬ್ರಿಲಿಯೆಂಟ್, ಜೀನಿಯಸ್) ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮ್ಯಾಪಿಂಗ್ ಕಾರ್ಯವನ್ನು ಸುಸಜ್ಜಿತವಾಗಿ ಕೈಗೊಳ್ಳುವುದು. 


ಮುಖ್ಯಶಿಕ್ಷಕರು ಶಾಲೆಯಲ್ಲಿ ಮಾರ್ಗದರ್ಶಿ ಶಿಕ್ಷಕರಾಗಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವುದು. 
ಶಿಕ್ಷಕರು ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವುದು.

ಕಾರ್ಯಕ್ರಮ ಅನುಷ್ಠಾನಗೊಳಿಸುವಾಗ ಮಕ್ಕಳ ದೈಹಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

ಮಾರ್ಗದರ್ಶಿ ಶಿಕ್ಷಕರು, ವಿಷಯವಾರು ತರಗತಿವಾರು, ಪಠ್ಯಕ್ರಮಕ್ಕೆ ಸಂಬAಧಿಸಿದAತೆ ಸಣ್ಣ ಸಣ್ಣ ವಿಡಿಯೋ ಕ್ಲಿಪಿಂಗ್ ಗಳ ಮೂಲಕ ಮಕ್ಕಳಲ್ಲಿ ಕಲಿಕೆಯನ್ನು ಉತ್ತೇಜಿಸುವುದು. 

ಅನುಪಾಲನಾಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯ ಮೂಲಕ ಮಾಹಿತಿ ನೀಡುವುದು.

ಅಭ್ಯಾಸ ಹಾಳೆಗಳನ್ನು, ಶಾಲಾ ಹಂತದಲ್ಲಿ  ತಯಾರಿಸಿ ಶಾಲೆಯಲ್ಲಿ ಲಭ್ಯವಿರುವ ಶಾಲಾನುದಾನ ಅಥವ ಸಂಚಿತ ನಿಧಿಯಿಂದ ಕಲಿಕಾ ಸಾಮಾಗ್ರಿಗಳನ್ನು ಮಕ್ಕಳಿಗೆ ಒದಗಿಸುವುದು. 

ಭೌಗೋಳಿಕ ಹಿನ್ನೆಲೆಯನ್ನು ಸರಿಯಾಗಿ ಗುರುತಿಸಿ ಮಾರ್ಗದರ್ಶಿ ಶೀಕ್ಷಕರಿಗೆ ವಿದ್ಯಾರ್ಥೀಗಳ ಗುಂಪನ್ನು ಹಂಚಿಕೆಮಾಡುವುದು.


Thursday, 19 March 2020

ವಸಂತಯಾನದಲ್ಲಿ ಮಹಾಳ ದಿನ

ಕ್ಲಾರಾ ಜೆಟ್'ಕಿನ್ ಮಹಿಳೆಯರ ಹಕ್ಕಿನ ಹೋರಾಟಗಾರಳು ಮತ್ತು ರೋಸಾ ಲಕ್ಸಂಬರ್ಗ್ ಸಮಾಜವಾದಿ ನಾಯಕಿ 1910ರಲ್ಲಿ




ಮಹಿಳೆ
ಮಹಾ..ಳೆ
ಅವಳಿಗೆ ಸಮರಾರು ಇಲ್ಲ.
ಪ್ರತಿ ದಿನವೂ ಅವಳ ದಿನವೇ. 
ಅವಳಿಲ್ಲದ ದಿನಗಳಿಲ್ಲ. 
ಅವಳಿಂದಲೇ ಕ್ಷಣಗಳೆಲ್ಲಾ. 
ಹಾಗಾಗಿ ಮಾರ್ಚ್ ಹಲವು ದಿನಾಚರಣೆಗಳಿಗೆ  ನಾಂದಿ ಹಾಡುವುದೇ ಈ ಮಹಿಳಾ ದಿನಾಚರಣೆ ಮೂಲಕ ಎನಿಸುತ್ತದೆ. ವಿಶ್ವದೆಲ್ಲೆಡೆ ಈ ದಿನ ಆಚರಿಸಲಾಗುತ್ತದೆ. ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಅಂತೆಯೇ ಮೈಸೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲೂ ಸಹ ದಿನಾಚರಣೆ ನಡೆಯಿತು.


ಮೈಸೂರು ಮಹಾನಗರ ಪಾಲಿಕೆಯ ಸದಸ್ಯೆಯವರಾದ ಶ್ರೀಮತಿ ಛಾಯಾ ನವೀನ್ ರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಕನ್ನಡ ಪ್ರಭ ಪತ್ರಿಕೆಯ ಮೈಸೂರು ವಿಭಾಗದ ಸಹ ಸಂಪಾದಕರು ಹಾಗು ಕವಿಗಳಾದ ಶ್ರೀ ಅಂಶಿ ಪ್ರಸನ್ನ ಕುಮಾರ್  ಆಗಮಿಸಿದ್ದರು. 

ಡಯಟ್ ನ ುಪನ್ಯಾಸಕರಾದ ಶ್ರೀಮತಿ ಭಾಗ್ಯಲಕ್ಷ್ಮೀ, ಶ್ರೀಮತಿ ಭಾಗ್ಯ, ಸೂಪರಿಂಟೆಂಡೆಂಟ್ ರವರಾದ ಶ್ರೀಮತಿ ಜಯಲಕ್ಷ್ಮೀಭಾಯಿರವರು ಮಹಿಳಾ ದಿನಚ ವಿಶೇಷತೆಗಳ ವಿಷಯ ಮಂಡನೆ ಮಾಡಿದರು.




Wednesday, 18 December 2019

ಐಟಿ@ಸ್ಕೂಲ್ಸ್ ಶಾಲಾ ಭೇಟಿ ನಮೂನೆ



ಐಟಿ@ಸ್ಕೂಲ್ಸ್ ಶಾಲೆಗಳಿಗೆ ಭೆಟಿ ನೀಡಿದ ಅಧಿಕಾರಿಗಳು ಭರ್ತಿ ಮಾಡಬೇಕಾದ ಆನ್ ಲೈನ್ ನಮೂನೆಗೆ ಇಲ್ಲಿ ಕ್ಲಿಕ್ಕಿಸಿ.

https://forms.gle/c31Zv25vSCsQUtyh8




ಐಟಿ@ಸ್ಕೂಲ್ಸ್ ತರಬೇತಿ ಕೇಂದ್ರಗಳಿಗೆ ಭೆಟಿ ನೀಡಿದ ಅಧಿಕಾರಿಗಳು ಭರ್ತಿ ಮಾಡಬೇಕಾದ ಆನ್ ಲೈನ್ ನಮೂನೆಗೆ ಇಲ್ಲಿ ಕ್ಲಿಕ್ಕಿಸಿ.  https://forms.gle/9R1GJp5yHT8Ubue76 


Friday, 13 December 2019

ಜಂಟಿ ನಿರ್ದೇಶಕರ ಭೇಟಿ

ಇಂದು ಡಿ.ಎಸ್.ಇ.ಆರ್.ಟಿ ಜಂಟಿನಿರ್ದೇಶಕರಾದ ಶ್ರೀಮತಿ ಗಾಯಿತ್ರಿದೇವಿಯವರು ಭೇಟಿ ನೀಡಿದ್ದರು. ಡಯಟ್ ಮೈಸೂರಿನಲ್ಲಿ ನಡೆಯುತ್ತಿದ್ದ ವಿವಿಧ ತರಬೇತಿಗಳಿಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಟ್ಯಾಲ್ಪ್ ತರಬೇತಿಗೆ ಆಗಮಿಸಿದ  ಅವರು ತರಬೇತಿ ಪಡೆಯುತ್ತಿದ್ದ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಶಿಕ್ಷಕರ ಅಭಿಪ್ರಾಯ ಕೇಳಿದರು. 


ತಾವೂ ಸಹ ಶಿಬಿರಾರ್ಥಿಗಳಿಗೆ ಕನ್ನಡ ಟೈಪಿಂಗ್ ಮತ್ತು UNDO  , CONTROL+Z , ಬಳಕೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಲ್ಲದೇ, ಟ್ಯಾಲ್ಪ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದರಿಂದ ಶಿಕ್ಷಕರು ಸ್ಮಾರ್ಟ್ ಆಗಲಿದ್ದಾರೆ. ಶಿಕ್ಷಕರೆಲ್ಲಾ ಒಂದು ಶಕ್ತಿ ಇದ್ದಂತೆ ಎಂದು ಶಿಕ್ಷಕರನ್ನು ಹುರಿದುಂಬಿಸಿದರು. 


ಈ ಸಂದರ್ಭದಲ್ಲಿ ಮೈಸೂರು ಡಯಟ್ ಪ್ರಾಂಶುಪಾಲರಾದ ಶ್ರೀ ಕೆ.ಮಹದೇವಪ್ಪನವರು ಹಾಗು ಇವೃತ್ತ ಜಂಟಿನಿರ್ದೇಶಕರಾದ ಶ್ರೀ ಪ್ರಭುಸ್ವಾಮಿ ರವರು, ಆರ್.ಎಂ.ಎಸ್.ಎ ನೊಡಲ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ರವರು ಹಾಗು ಟ್ಯಾಲ್ಪ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್.ಎಂ.ಸಿ ಹಾಗು ಶ್ರೀಮತಿ ಭಾಗ್ಯಲಕ್ಷ್ಮೀರವರು ಉಪಸ್ಥಿತರಿದ್ದರು.

Thursday, 5 December 2019

ಇ-ಕಂಟೆಂಟ್ ಕಮಿಟ್ಮೆಂಟ್

ಇ-ಕಂಟೆಂಟ್. ಟ್ಯಾಲ್ಪ್ ತರಬೇತಿಗಳ ಮುಂದುವರಿದ ಭಾಗ. 2016-17ನೇ ಸಾಲಿನಲ್ಲಿ ಟ್ಯಾಲ್ಪ್ ಗೆ ಆಯ್ಕೆಗೊಂಡ ಶಾಲೆಗಳಲ್ಲಿ ಇಬ್ಬರು ಶಿಕ್ಷಕರು ಈ ಇ-ಕಂಟೆಂಟ್   ತರಬೇತಿ ಪಡೆದಿದ್ದಾರೆ. ಪ್ರಸ್ತುತ ಶಾಲೆಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ತರಬೇತಿಯು ಅನುಷ್ಠಾನಗೊಂಡಿದ್ದು, ಅದರ ವಿವಿಧ ಶಾಲೆಯ ಚಿತ್ರಗಳು ಇಂತಿವೆ.

ಸರ್ಕಾರಿ ಪ್ರೌಢಶಾಲೆ, ಹಂಪಾಪುರ, ಕೆ.ಆರ್.ನಗರ ತಾ.

ಸರ್ಕಾರಿ ಪ್ರೌಢಶಾಲೆ, ಹಂಪಾಪುರ, ಕೆ.ಆರ್.ನಗರ ತಾ.

Add caption

ಸರ್ಕಾರಿ ಪ್ರೌಢಶಾಲೆ, ಎನ್.ಆರ್.ಮೊಹಲ್ಲಾ,ಮೈಸೂರು ಉತ್ತರ


ಚೆನ್ನೈ ಡಯಟ್ ತಂಡದ ಭೇಟಿ


ಇಂದು ಚೆನ್ನೈ ಡಯಟ್ ನ ಉಪನ್ಯಾಸಕರ ತಂಡ ಮೈಸೂರು ಡಯಟ್ ಗೆ ಭೇಟಿ ನೀಡಿತ್ತು. ಶೈಕ್ಷಣಿಕ ಅದ್ಯಯನದ ಹಿನ್ನೆಲೆಯಲ್ಲಿ ಆಗಮಿಸಿದ್ದ ತಂಡದ ಸದಸ್ಯರು ಮೈಸೂರು ಡಯಟ್ ನಲ್ಲಿ ನಡೆಯುತ್ತಿದ್ದ ತರಬೇತಿಗಳು ಮತ್ತು ಡಯಟ್ ನ ನಾವಿನ್ಯಯುತ ಚಟುವಟಿಕೆಗಳನ್ನು ಪರಿವೀಕ್ಷಿಸಿದರು.






Wednesday, 4 December 2019

ಇ-ತ್ಯಾಜ್ಯ ನಿರ್ವಹಣೆ ಸಭೆ

ಈ ದಿನ ಮೈಸೂರು ಡಯಟ್ ನಲ್ಲಿ ನಡೆದ ಇ-ತ್ಯಾಜ್ಯ ನಿರ್ವಹಣೆ ಮತ್ತು ಡಯಟ್ ತರಬೇತಿಗಳ ಸಂಬಂಧ ಸಭೆಯಲ್ಲಿ ಮೈಸೂರು ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ತಂಡ ಭಾಗವಹಿಸಿತ್ತು. ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಚರ್ಚಿಸಲಾಯಿತು. 

ಮೊದಲಿಗೆ ಇ-ತ್ಯಾಜ್ಯ ಮತ್ತು ಇ ಆಸ್ತಿ ನಿರ್ವಹಣೆ ಸಂಬಂಧ ಕೈಪಿಡಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀರವರು ಈ ಬಗ್ಗೆ ವಿವರಿಸಿದರು.
  • ಪ್ರತಿ ಶಾಲೆಗಳಲ್ಲಿ ಮತ್ತು ವಲಯ ಮಟ್ಟದಲ್ಲಿ ಮೊದಲಿಗೆ ಈ ಸಂಭಂಧ ಇ-ಕೋಶ ರಚಿಸಲು ತಿಳಿಸಲಾಯಿತು. 
  • ಸುತ್ತೋಲೆಯಲ್ಲಿ ತಿಳಿಸಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ತಾಲೂಕು ಹಂತದ ಕಚೇರಿಗಳಲ್ಲಿ, ಜಿಲ್ಲಾ ಹಂತದ ಕಚೇರಿಗಳಲ್ಲಿ ಇರುವ ಇ ಆಸ್ತಿಗಳನ್ನು ಅವುಗಳ ಸ್ಥಿತಿಗತಿ ಆಧರಿಸಿ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿಗಳನ್ನು ಕ್ರೋಢೀಕರಿಸಿ ತಾಲೂಕು ಹಂತಕ್ಕೆ , ನಂತರ ಜಿಲ್ಲಾ ಹಂತಕ್ಕೆ ರವಾನಿಸಲು ತಿಳಿಸಲಾಯಿತು.
  • ನಂತರ ಟ್ಯಾಲ್ಪ್  ಅಥವ ಐಟಿ@ಸ್ಕೂಲ್ಸ್ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ನೀಡಲಾಯಿತು. ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್.ಎಂ.ಸಿರವರು ಮಹತ್ವಾಕಾಂಕ್ಷಿಯ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುತ್ತಿರುವ ತರಬೇತಿ ಮತ್ತು ಅದರ ಸ್ವರೂಪ ಹಾಗು ತರಬೇತಿಯ ಬಳಿಕ ತರಗತಿಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆಯೂ ವಿವರಿಸಲಾಯಿತು. 
  • ಜಿಲ್ಲೆಯ ಎಲ್ಲಾ ಬ್ಲಾಕ್ ನ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಟ್ಯಾಲ್ಪ್ ಶಾಲೆಗಳಲ್ಲಿ ಬ್ಲಾಗ್ ರಚಿಸಲು ತಿಳಿಸಿದ್ದು, ಇವುಗಳನ್ನು ಸಂಭಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಉಸ್ತುವಾರಿ ಮಾಡಲು ತಿಳಿಸಲಾಯಿತು.

  • ಆರ್.ಎಂ.ಎಸ್.ಎ ತರಬೇತಿ ಸಂಬಂಧ ಮಾಹಿತಿಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ಸರ್ ಹಂಚಿಕೊಂಡರು. ನಿಗದಿಪಡಿಸಿರುವ ಗುರಿ ತಲುಪಲು ಮುಂದಿನ ತರಬೇತಿಗಳಿಗೆ ಶಿಕ್ಷಕರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿಕೊಡಲು ತಿಳಿಸಲಾಯಿತು.

  •  ಇದೇ ವೇಳೆ ಗುರುಚೇತನ ತರಬೇತಿ ಬಗ್ಗೆ ವಿವರಣೆಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಶೇಖರ್ ರವರು ವಿವರಿಸಿದರು. 

  • ಈ ಸಂದರ್ಭದಲ್ಲಿ ಓದು ಕರ್ನಾಟಕ ಮತ್ತು ಗಣಿತ ಕಲಿಕಾಂದೋಲನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ನಂಜುಂಡಾರಾಧ್ಯ ರವರು ತಮ್ಮ ಗುರಿ-ಸಾಧನೆಯ ಬಗ್ಗೆ ವಿವರಿಸಿದರು
  • NISHTHA ತರಬೇತಿಯ ಉದ್ದೇಶ ಮತ್ತು ಮುಂದಿನ ದಿನಗಳಲ್ಲಿ KRP&SRP ಗಳನ್ನು ಬಳಸಿಕೊಂಡು ಕೈಗೊಳ್ಳಬೇಕಾದ ತರಬೇತಿಗಳ ಬಗ್ಗೆ ಶ್ರೀಮತಿ ರಾಧಾಮಣಿ ರವರು ವಿವರಿಸಿದರು.
  • ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಸಂಭಂಧ ವಲಯ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳೋಂದಿಗೆ ವಿಭಾಗದ ಮುಖ್ಯಸ್ಥರಾದ ಶ್ರೀ ಸಿ.ನಾಗರಾಜಯ್ಯನವರು ಚರ್ಚಿಸಿದರು.


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...