My Blog List

Wednesday, 18 September 2019

೨೦೧೯-೨೦ನೇ ಸಾಲಿನ ಗ್ರೂಪ್ - ೨ ರ ಮೊದಲ ತಂಡದ ತರಬೇತಿ



ದಿನಾಂಕ: ೧೬-೦೯-೨೦೧೯ ರಿಂದ ೨೫-೦೯-೨೦೧೯ರವರೆಗೆ ೨೦೧೯-೨೦ನೇ ಸಾಲಿನ ಶಾಲೆಗಳ ಮೊದಲನೇ ತಂಡದ ತರಬೇತಿಯನ್ನು ಡಯಟ್ ನಲ್ಲಿ ಆರಂಭಿಸಲಾಗಿದೆ. ಪ್ರಸ್ತುತ ಬ್ಯಾಚ್ ನಲ್ಲಿ ೪೨ ಶಿಬಿರಾರ್ಥಿಗಳು ಇದ್ದು, ಬಹಳ ಸಂತೋಷವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುವ ಮನಸು ಹೊಂದಿದ್ದಾರೆ. 


೨೦೧೯-೨೦ನೇಸಾಲಿನ ಶಾಲೆಗಳ - ಇಂಡಕ್ಷನ್ ೨ನೇ ತಂಡ


ದಿನಾಂಕ: ೧೧-೦೯-೨೦೧೯ ರಿಂದ ೨೦-೦೯-೨೦೧೯ರವರೆಗೆ ೨೦೧೯-೨೦ನೇ ಸಾಲಿನ ಶಾಲೆಗಳ ಎರಡನೇ ತಂಡದ ತರಬೇತಿಯನ್ನು ಡಯಟ್ ನಲ್ಲಿ ಆರಂಭಿಸಲಾಗಿದೆ. ಪ್ರಸ್ತುತ ಬ್ಯಾಚ್ ನಲ್ಲಿ ೪೨ ಶಿಬಿರಾರ್ಥಿಗಳು ಇದ್ದು, ಬಹಳ ಸಂತೋಷವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುವ ಮನಸು ಹೊಂದಿದ್ದಾರೆ. 



Friday, 13 September 2019

2016-17 IT@SCHOOLS HM'S MEETING

2016-17 IT@SCHOOLS HM'S MEETING
ಈ ದಿನ 2016-17ನೇ ಸಾಲಿನ ಐಟಿ@ಸ್ಕೂಲ್ಸ್ ಶಾಲೆಗಳ ಮುಖ್ಯಶಿಕ್ಷಕರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಈ ಕೆಳಕಂಡ ಅಜೆಂಡಾಗಳ ಕುರಿತಂತೆ ಸಮಗ್ರವಾಗಿ ಮುಖ್ಯಶಿಕ್ಷಕರಿಗೆ ಮಾಹಿತಿಯನ್ನು ತಿಳಿಸಲಾಯಿತು.


ಅಜೆಂಡಾಗಳು
  • ಪೋಸ್ಟ್ ಡೆಲಿವರಿ ಇನ್ಸ್ ಪೆಕ್ಷನ್
  • ಐಟಿ ಪರಿಕರಗಳ ದಾಸ್ತಾನು ನಿರ್ವಹಣೆ
  • ಇ-ಸಂಪನ್ಮೂಲಗಳ ಬಳಕೆ
  • ಕಂಪ್ಯೂಟರ್ ಲ್ಯಾಬ್ ನಿರ್ವಹಣೆ
  • ತರಗತಿಯಲ್ಲಿ ತಂತ್ರಜ್ಞಾನನ ಅನುಷ್ಠಾನ
  • ಪ್ರತಿ ಶಾಲೆಯಲ್ಲಿ ಇಟಿ ಸೆಲ್ ರಚನೆ
  • ಶಾಲೆಗಳ ಬ್ಲಾಗ್ ಸಕ್ರೀಯಗೊಳಿಸುವಿಕೆ





Wednesday, 4 September 2019

ವಿಭಾಗೀಯಮಟ್ಟದ ಕಾರ್ಯಾಗಾರ


ಈ ದಿನ ಐಟಿ@ಸ್ಕೂಲ್ಸ್ ಕರ್ನಾಟಕ 2016-17ನೇ ಸಾಲಿನ ಶಾಲೆಗಳ POST DELIVERY INSPECTION  REPORT ನಡೆಸುವ ಸಂಬಂಧ ವಿಭಾಗೀಯ ಮಟ್ಟದ ಕಾರ್ಯಾಗಾರ ನಡೆಸಲಾಯಿತು. 
 ಡಿ.ಎಸ್.ಇ.ಆರ್.ಟಿಯ ಇಟಿ ವಿಭಾಗದ ಉಪನಿರ್ದೇಶಕರಾದ ಶ್ರೀ ಸೂರ್ಯಪ್ರಕಾಶ್, ಎಸ್.ಎ.ಡಿ.ಪಿ.ಐ ರವರಾದದ ಶ್ರೀ ಬೈಲಾಂಜನಪ್ಪನವರು ಮತ್ತು ಅವರ ತಾಂತ್ರಿಕ ಸಮಿತಿ ಸದಸ್ಯರು ಮೈಸೂರು ಡಯಟ್ ನಲ್ಲಿ ಭಾಗವಹಿಸಿ ವಿಭಾಗೀಯ ಹಂತದಿಂದ ಆಗಮಿಸಿದ್ದ 8 ಜಿಲ್ಲೆಗಳ ಸಮಿತಿಯ ಸದಸ್ಯರಿಗೆ ಮಾಹಿತಿ ಹಂಚಿಕೊಂಡರು. 
ಎರಡು ಹಂತಗಳಲ್ಲಿ ಕಾರ್ಯಾಗಾರ ನಡೆಸಲಾಯಿತು. ಮೊದಲಿಗೆ ಪರಿಶೀಲನಾ ತಂಡ ರಚನೆ ಮತ್ತು ತಂಡವು ಶಾಲೆಗಳಿಗೆ ತೆರಳಿ ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಸಲಹೆ ಮಾರ್ಗದರ್ಶನ ನೀಡಲಾಯಿತು.

 ನಂತರ ಕಂಪ್ಯೂಟರ್ ಲ್ಯಾಬ್ ಗೆ ತೆರಳಿ ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳ ಪ್ರಾಂಶುಪಾಲರು ಮತ್ತು ನೋಡಲ್ ಅಧಿಕಾರಿಗಳ ತಂಡ ಜೊತೆಗೂಡಿ ಅನುಭವ ಪಡೆದುಕೊಂಡರು.



Monday, 26 August 2019

ಐಟಿ@ಸ್ಕೂಲ್ಸ್ ಇಂಡಕ್ಷನ್ ತರಬೇತಿ - ೬ನೇ ಬ್ಯಾಚ್


ದಿನಾಂಕ:೧೯-೦೮-೨೦೧೯ ರಿಂದ ೨೮-೦೮-೨೦೧೯ ರವರೆಗೆ ಟ್ಯಾಲ್ಪ್ ಹೊಸ ಶಾಲೆಗಳ ಇಂಡಕ್ಷನ್ ತರಬೇತಿ ೬ನೇ ಬ್ಯಾಚ್ ನ್ನು ಡಯಟ್ ಮೈಸೂರಿನ ಹೊಸಲ್ಯಾಬ್ ನಲ್ಲಿ ಆರಂಭಿಸಲಾಯಿತು.

ಪ್ರಾಂಶುಪಾಲರಾದ ಶ್ರೀ ಕೆ. ಮಹದೇವಪ್ಪ ನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್ .ಎಂ.ಸಿ, ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ಮತ್ತು ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಜಯಶ್ರೀ ಮೇಂ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ರಾಜೇಶ್ , ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.


Tuesday, 6 August 2019

ವಸಂತಯಾನದಲ್ಲಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳು


ಈ ದಿ ನ ವಸಂತಮಹಲ್ ನಲ್ಲಿ ವಸಂತಯಾನದ ಸಂಭ್ರಮ. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಸಾರಥಿಗಳಾದ ಶ್ರೀ ಎಸ್.ಆರ್. ಉಮಾಶಂಕರ್ ರವರು, ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಮೈಸೂರು ಜಿಲ್ಲೆಯ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆಗೆಂದು ಆಗಮಿಸಿದರು. 


ಈ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಹೃದಯಸ್ಪರ್ಶಿಯಾಗಿ ಶ್ರೀಯುತರನ್ನು ಸ್ವಾಗತಿಸಿದರು.


ಮೈಸೂರು ಜಿಲ್ಲೆಯ ಎಲ್ಲಾ ವಲಯಗಳ  ಶಿಕ್ಷಣಾಧಿಕಾರಿಗಳೊಂದಿಗೆ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಸಮವಸ್ತ್ರಗಳನ್ನು ಶಾಲೆಯಿಂದ ತರಿಸಿಕೊಂಡು ಗುಣಮಟ್ಟವನ್ನು ಪರಿಶೀಲಿಸಿದರು.




NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...