My Blog List

Saturday 17 October 2015

ಬಾಪೂಜಿ-ಶಾಸ್ತ್ರೀಜಿ ನೆನಪು


"ಬಾಪೂಜಿ ನಿನ್ನ ಕೈಯೊಳಗಿದ್ದ ಕೋಲು
ಕೋಲ್ಮಿಂಚಿಗೂ ತರಿಸಬಹುದಲ್ಲವೇ ಸೋಲು"
ಈ ಸಾಲುಗಳು ಮತ್ತು





"ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ"
ಈ ಸಾಲುಗಳು 
ಇಂದು ಅನುರಣಿಸಿದವು.

ಕಾರ್ಯಕ್ರಮದ ಉದ್ಘಾಟನೆ ಮಾನ್ಯ ಪ್ರಾಂಶುಪಾಲರಿಂದ

ಬಾಪೂಜಿ ಬಗ್ಗೆ ಬಿಚ್ಚಿಟ್ಟ ಮಾತು ಪ್ರಾಂಶುಪಾಲರಾದ ಶ್ರೀ ಆರ್. ರಘುನಂದನ್ ರವರಿಂದ 

ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್"

ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್"
ಇಂದು ಮತ್ತೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನೃಪತುಂಗ ಸಭಾಂಗಣ ವೇದಿಕೆ ಆಯ್ತು. ನಮ್ಮ ಸಂಸ್ಥೆಯ ಲಿಪಿಕ ನೌಕರರಾದ ಶ್ರೀ ಸೋಮಯ್ಯ ರವರ ಸುಪುತ್ರ ಆದೀಶ್ ಗೆ ಗೌರವಿಸಲಾಯಿತು. ಕಾರಣ ಈತ ವಿಶೇಷ ಚೇತನ. ಆದರೆ ಹೆತ್ತವರಿಗೆ, ನಮ್ಮ ನಾಡಿಗೆ ವಿಶಿಷ್ಟ ಪ್ರತಿಭೆ. ಮಾತು ಮೌನವಾದರೂ, ಶಬ್ದದೊಳಗಿನ ಶಬ್ದ ಮಾತ್ರ ಕೇಳುವ ಪೋರ ಈ ಆದೀಶ್. ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ. ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ, ಈಜುಸ್ಪರ್ಧೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಆದೀಶ್ ನಮ್ಮ ಡಯಟ್ ಸಿಬ್ಬಂದಿಯವರ ಸುಪುತ್ರ ಎಂಬುದು ಹೆಮ್ಮೆಯ ಸಂಗತಿ. ಈತನಿಗೆ ಡಯಟ್ ವತಿಯಿಂದ ಗೌರವಿಸಲಾಯಿತು. ಇನ್ನೂ ಸಾಧನೆಯ ಶಿಖರವೇರಲಿ ಎಂದು ಎಲ್ಲರೂ ಹರಸಿದರು.

ಅಂತರರಾಷ್ಟ್ರೀಯ ಚೆಸ್ ಆಟಗಾರ ಆದೀಶ್ ಗೆ ಪ್ರಾಂಶುಪಾಲರಿಂದ ಗೌರವ

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...