My Blog List

Saturday 13 September 2014

ನೆನೆ ನೆನೆ ಆ ದಿನವಾ

ಶಿಕ್ಷಕ-ರಾಷ್ಟ್ರ ರಕ್ಷಕ. ಒಂದು ದೇಶದ ಭವಿಷ್ಯ ತರಗಿ ಕೋಣೆಯೊಳಗೆ ನಿರ್ಮಾಣಗೊಳ್ಳುತ್ತೆ. ಇತ್ಯಾದಿ ಇತ್ಯಾದಿ. ಮಾತು ಕೇಳಿದ್ದೇವೆ. ಕೇಳುತ್ತಿದ್ದೇವೆ. ಕೇಳುತ್ತಿರುತ್ತೆವೆ. ಇದು ಸತ್ಯ. ಹಾಗಾಗಿಯೇ ಸತ್ಯಧ್ವನಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿರುತ್ತೆ. ಹೀಗೆಯೇ ಸತ್ಯಧ್ವನಿ ಪ್ರತಿಧ್ವನಿಸಿದ್ದು ಶಿಕ್ಷಕರ ದಿನಾಚರಣೆಯಲ್ಲಿ. ಈ ವರ್ಷದ ಶಿಕ್ಷಕರ ದಿನ ಇತಿಹಾಸ. ಕಾರಣ ನಿಮಗೆ ತಿಳಿದಿದೆ. 

ಇದು ಈ ದೇಶದ ಇತಿಹಾಸದಲ್ಲೇ ಮೊದಲು. ದೆಹಲಿಯ ಮಾಣಿಕ್ ಷಾ ಸಭಾಂಗಣ ಎಲ್ಲ ಸುದ್ದಿವಾಹಿನಿಗಳಲ್ಲಿ ವಿಜೃಂಭಿಸಿತು. ಭವ್ಯಭಾರತದ ಕನಸುಗಳು ಕಣ್ತೆರೆದವು, ಕಣ್ತೆರೆಸಿದವು. ಮಧ್ಯಾಹ್ನ 3.00 ಗಂಟೆಯಿಂದ 4.45ರವರೆಗೆ ಮನೆಮನೆಳಲ್ಲಿ ಮಕ್ಕಳ ಪ್ರಶ್ನೆ ಪ್ರತಿಫಲಿಸಿದವು.

ಶ್ರಿ ನರೇಂದ್ರ ಮೋದಿಯವರ ಮಾತುಗಳನ್ನು ಹಿಡಿದಿಡುವುದಾದರೇ…
-      ದೇಶೋದ್ಧಾರಕ್ಕೆ ದೊಡ್ಡ ದೊಡ್ಡ ಕನಸುಬೇಕಿಲ್ಲ. ಪುಟ್ಟ ಪುಟ್ಟ ಆಲೋಚನೆ ಸಾಕಾರಗೊಳಿಸಿ
-      ಸಣ್ಣ ಕೆಲಸಗಳೊಂದಿಗೆ ಕೈ ಜೋಡಿಸಿದರೇ ಅದು ಶ್ರೇಷ್ಠ ದೇಶಸೇವೆ.
-      ಮೇರು ವ್ಯಕ್ತಿಗಳ ಜೀವನಚರಿತ್ರಯಿಂದ ಸತ್ಯದರ್ಶನ, ಬದುಕಿನ ಮೌಲ್ಯದ ಅರಿವು ಸಾಧ್ಯ.
-      ಅಂಗೈಯಲ್ಲೇ ವಿಶ್ವ ತೆರೆದಿಡುವ ಗೂಗಲ್ ಬರಿ ಮಾಹಿತಿ ನೀಡುವುದೇ ವಿನಃ ಜ್ಞಾನವನ್ನಲ್ಲ.
-      ಅದೇನೇ ಅಡ್ಡಿ ಆತಂಕ ಬರಲಿ ಕನಸುಗಳ ಬೆನ್ನೇರುವುದ ಬಿಡದಿರಿ.
-      ಸೌಹಾರ್ದತೆ ಕಲಿಯಿರಿ. ಶಾಂತಿಯಲ್ಲಿ ನೆಲೆಸಿರಿ.
-      ಚೆನ್ನಾಗಿ ಕೆಲಸ ಮಾಡಿ. ಚೆನ್ನಾಗಿ ಆಟವಾಡಿ. ಸಾಕಷ್ಟು ಬೆವರು ಹರಿಸಿ.
-      ಎಲ್ಲ ಮಕ್ಕಳೂ ವಿಶೇಷ. ಶಿಕ್ಷಕರು ಇಲ್ಲಿ ತಾರತಮ್ಯ ಕಾಣಬಾರದು.

ದೇಶಕ್ಕೆ ದೇಶವೇ ಅಂದು ಕುತೂಹಲದ ಕಣ್ತೆರೆದಿತ್ತು. ಅದಕ್ಕೆ ನಮ್ಮ ಜಿಲ್ಲೆಯೂ ಹೊರತಲ್ಲ. ಅಂದು ಮಕ್ಕಳು ಸಂವಾದದ ನೇರ ಪ್ರಸಾರ ವೀಕ್ಷಿಸಿದರು. ಸುತ್ತೂರಿನಲ್ಲಿ ಸದ್ದಿಲ್ಲದೇ ಸಂವಾದಕ್ಕೆ ಮಕ್ಕಳು ಕಿವಿಯಾದರು. ಆ ದೃಶ್ಯವೇ ಅಮೋಘ.




- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...