My Blog List

Saturday 30 August 2014

ಬೀಳ್ಕೊಡುಗೆ

ವರ್ಗಾವಣೆ. ಈ ಪದವೇ ಹಲವರಿಗೆ ಅಪಥ್ಯ. ಕೆಲವರಿಗೆ ಸಹ್ಯ. ಒಳಿತಾದರೆ ಇದು ಸಹಜ. ಇಲ್ಲವಾದರೆ ಅದುವೇ ಸಜ !?.  ಈ ವಿಚಾರದಲ್ಲಿ "ಯದ್ಭಾವಂ ತದ್ಭವತಿ.." ಎಂದರೆ ಸರಿ ಹೋದೀತು....ಯಾವೊಂದು ಸಂಸ್ಥೆಯೂ ಹೊರತಲ್ಲ. ಅಂತೆಯೇ ಈ ವರ್ಷ ನಮ್ಮ ಸಂಸ್ಥೆಯ ಮೂವರು ವರ್ಗಾವಣೆಗೊಂಡರು.


ವರ್ಗಾವಣೆಗೊಂಡ ಮೂವರು ಹಿರಿಯರೇ. ಮೂವರು ಅನುಭವಿಗಳೇ. ಮೂವರು ದಕ್ಷರೇ. ಮೂವರು ಮೂರುತಿಗಳು ಹಲವು ಕೀರುತಿಗಳಿಗೆ ಭಾಜನರಾಗಿದ್ದವರು. ಅವರೆಂದರೆ :
1. ರುಕ್ಸಾನ ನಾಝನೀನ್, ಹಿರಿಯ ಉಪನ್ಯಾಸಕರು
2. ನಾಗರಾಜಯ್ಯ, ಹಿರಿಯ ಉಪನ್ಯಾಸಕರು
3. ಗಾಯಿತ್ರಿ.ಟಿ.ಎನ್. ಹಿರಿಯ ಉಪನ್ಯಾಸಕರು- ಇವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

 


ಈ ಸಂಸ್ಥೆಯಲ್ಲಿ ಕಂಡ ಕನಸು. ಆದ ನನಸು. ಅದರ ಸೊಗಸು. ಸವಿ ನೆನಪು. ಅದರ ಹೊಳಪು. ಎಲ್ಲವನ್ನೂ ಬೀಳ್ಕೊಡುಗೆ ಸ್ವೀಕರಿಸಿದ ಎಲ್ಲರೂ ಸ್ಮರಿಸಿದರು. ಕಣ್ಣಾಲಿಗಳು ಕಾವೇರಿ ಕರೆದವು. ವಿಸ್ಮೃತಿಗೆ ಅವಕಾಶ ಕೊಡದೆ ಸ್ಮೃತಿಪಟಲದಲ್ಲಿ ಈ ಕ್ಷಣ ಉಳಿಯಿತು.

 
 
 
 ಹಾಗೆಯೇ ಇವರ ಸ್ಥಾನವನ್ನು ಚಾಮರಾಜನಗರ ಡಯಟ್ ನಿಂದ ಉಪಪ್ರಾಂಶುಪಾಲರ ಸ್ಥಾನಕ್ಕೆ ಆಗಮಿಸಿದ ನಾರಯಣಗೌಡರವರು, ಹಾಸನ ಡಯಟ್ ನಿಂದ ಆಗಮಿಸಿದ ಹಿರಿಯ ಉಪನ್ಯಾಸಕಿ ಇಂದ್ರಮ್ಮ ರವರು ಮತ್ತು ಕೊಡಗು ಡಯಟ್ ನಿಂದ ಬಂದ ಹಿರಿಯ ಉಪನ್ಯಾಸಕರಾದ ಸಿದ್ದರಾಜುರವರು ಸಮರ್ಥವಾಗಿ ತುಂಬಬಲ್ಲುರು ಎಂಬುದು ಸಂಸ್ಥೆಯ ಆಶಯ.

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...