My Blog List

Friday 27 April 2018

ಪ್ರಧಾನ ಕಾರ್ಯದರ್ಶನ

ದಿನಾಂಕ:14-04-2018. ಪೂರ್ವಾಹ್ನದ ಸಮಯ. ಅಂಬೇಡ್ಕರ್ ದಿನಾಚರಣೆ ಸಂಸ್ಥೆಯಲ್ಲಿ ನಡೆದಿತ್ತು. ಕಾರ್ಯಕ್ರಮ ಮುಗಿದ ನಂತರ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಬರುವುದಾಗಿ ವಿಷಯ ತಿಳಿಯಿತು. ಎಲ್ಲರೂ ಕುತೂಹಲಿಗಳಾಗಿದ್ದೆವು. ನಿರೀಕ್ಷೆಯಂತೆ ಡಾ.ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ..ರವರು ಡಯಟ್,ಮೈಸೂರಿಗೆ ಆಗಮಿಸಿದರು.


 ಹಾಜರಿದ್ದವರು :
ಶ್ರೀ ಪ್ರಭುಸ್ವಾಮಿ, ಪ್ರಾಚಾರ್ಯರು, ಸಿಟಿಇ, ಮೈಸೂರು
ಶ್ರೀಮತಿ ಮಮತಾ, ಉಪನಿರ್ದೇಶಕರು(ಆಡಳಿತ), ಮೈಸೂರು
ಶ್ರೀ ರಘುನಂದನ್.ಆರ್.,ನ ಉಪನಿರ್ದೇಶಕರು(ಅಭಿವೃದ್ಧಿ), ಡಯಟ್,ಮೈಸೂರು
ಸಂಸ್ಥೆಯ ಎಲ್ಲಾ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಡಯಟ್, ಮೈಸೂರು



  • ಎನ್.ಎ.ಎಸ್ ಫಲಿತಾಂಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

  • ತಂಡದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಯಶಸ್ಸಿನ ಪಾಲುದಾರರಾಗಲು ಪ್ರೇರೇಪಿಸಿದರು.

  • ಆರ್.ಐ.ಇ ವಿದ್ಯಾರ್ಥಿ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕಿಟ್ಟ ಕಡಿಮೆ ವೆಚ್ಚದ ಕಲಿಕೋಪಕರಣದ ಬಗ್ಗೆ ವಿವರಿಸುತ್ತಾ ನಿಮ್ಮ ಜಿಲ್ಲೆಯ ಶಾಲೆಗಳಲ್ಲೂ ಈ ರೀತಿಯಾಗಿ ಮಕ್ಕಳ ಕ್ಷಮತೆ ಗುರುತಿಸಲು ಸಲಹೆ ನೀಡಿದರು.

  • ಜಿಲ್ಲೆಯ ಶೈಕ್ಷಣಿಕ ಉಸ್ತುವಾರಿದಾರರಾದ ನಮಗೆ ಏಕಾಗ್ರತೆ ಅವಶ್ಯಕ ಎನ್ನುವುದನ್ನು ಮಾದರಿ ಶಿಕ್ಷಕಿ ಶಾಂತಿದೇಸಾಯಿ ಉದಾಹರಣೆಯೊಂದಿಗೆ ವಿವರಿಸಿದರು.

  • ಫಿನ್ ಲ್ಯಾಂಡ್ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿರುವ ಶೈಕ್ಷಣಿಕ ವ್ಯವಸ್ಥೆಗಳನ್ನು ನಮ್ಮ ಕಣ್ಣಮುಂದಿಟ್ಟು ಮೌಲ್ಯಗಳುಳ್ಳ ಪಠ್ಯವಸ್ತುವಿನ ಸ್ವರೂಪವನ್ನು ತೆರೆದಿಟ್ಟರು.  

  • ನಾವಿನ್ಯಯುತ ಆಚರಣೆಗಳು ನಮ್ಮೆಲ್ಲರಲ್ಲೂ ಹಾಸುಹೊಕ್ಕಾಬೇಕೆಂದು ಬಯಸಿದರು.

  • ಶೈಕ್ಷಣಿಕ ಗುಣಮಟ್ಟದ ಬಲವರ್ಧನೆ/ಸುಧಾರಣೆಗೆ ಸಂಬಂಧಿಸಿದ ನಿಮ್ಮ ಯಾವುದೇ ಸಲಹೆಗಳು, ಆಲೋಚನೆಗಳನ್ನು ಎದುರು ನೋಡುವ ನಿರೀಕ್ಷೆಯನ್ನು ಮುಂದಿಟ್ಟರು.









No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...