My Blog List

Monday 20 August 2018

ಮರಿವಿಜ್ಞಾನಿಗಳ ವಿಚಾರಗೋಷ್ಠಿ

"ಹಳೆ ಬೇರು ಹೊಸ ಚಿಗುರು
ಕೂಡಿರಲು ಮರ ಸೊಬಗು
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ 
ಜಸವು ಜನಜೀವನಕೆ ಮಂಕುತಿಮ್ಮ||"

ಎಂಬ ಮಾತಿನಂತೆ ನಮ್ಮ ಡಯಟ್ ಅಂಗಳಕ್ಕೂ ಈ ದಿನ ಮೈಸೂರಿನ 9 ಬ್ಲಾಕ್ ಗಳಿಂದ ವಿಜೇತರಾದ ಒಟ್ಟು 27 ಮರಿ ವಿಜ್ಞಾನಿಗಳು ಆಗಮಿಸಿದ್ದರು.

ಕೈಗಾರಿಕಾ ಕ್ರಾಂತಿ ವಿಚಾರವಾಗಿ ತಮ್ಮ ವಿಚಾರ ಪ್ರಸ್ತುತಪಡಿಸಿದರು. ಬಹಳ ಹುರುಪಿನಿಂದ ತಮ್ಮ ವಿಚಾರ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಶಿಕ್ಷಕರ ಜೊತೆಗಿದ್ದರು.

ಪ್ರಾಂಶುಪಾಲರು ಮಕ್ಕಳನ್ನು ಹುರಿದುಂಬಿಸಿದರು. ಯಾವುದೇ ಭಯವಿಲ್ಲದೇ ಮಕ್ಕಳು ಸಂತೋಷದಿಂದ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳಿ ಎಂದು ಪ್ರೇರೇಪಿಸಿದರು.

ಕಾರ್ಯಕ್ರಮವನ್ನು ನಿರೂಪಣೆಯೊಂದಿಗೆ ಉಪನ್ಯಾಸಕರಾದ  ಪ್ರಶಾಂತ್.ಎಂ.ಸಿ ಆರಂಬಿಸಿದರು. ಉಪನ್ಯಾಸಕರಾದ ಶಿವರಾಜ್ ರವರು ಸ್ಪರ್ಧೆಯನ್ನು ನಡೆಸಿಕೊಟ್ಟರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ರವರು ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ತೀರ್ಪುಗಾರರಾಗಿ ಆಗಮಿಸಿದ್ದ ಟಿಟಿಐ ಪ್ರಾಂಶುಪಾಲರಾದ ನಂಜುಂಡಸ್ವಾಮಿ ರವರು, ಉಪನ್ಯಾಸಕರಾದ ನಾಗೇಂದ್ರ ರವರು, ಶ್ರೀಮತಿ ಕಮಲಮ್ಮ ರವರು ಪಾರದರ್ಶಕವಾಗಿ ರಾಜ್ಯಮಟ್ಟಕ್ಕೆ ಸೂಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು.

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...